Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Sunday 1 September 2013

ಸ್ವಾರ್ಥಿ!


2 comments:

  1. ಸುಂದರ ಮತ್ತು ಪ್ರಬುದ್ಧ ಚಿಂತನೆ ಗೆಳೆಯರೇ,ರಚನೆಗಳು ಇನ್ನಷ್ಟು ಗಟ್ಟಿಗೊಳ್ಳುತ್ತಿವೆ.ಸಮಾಜ ಮುಖಿಯಾಗುತ್ತಿರುವ ನಿಮ್ಮ ಲೇಖನಿಗೆ ಇನ್ನಷ್ಟು ಶಕ್ತಿ ಮೂಡಬಹುದೆಂಬ ಆಶಾ ಭಾವನೆ ನನ್ನದು.ಕೇವಲ ಪ್ರೀತಿ ಸ್ನೇಹ,ಪ್ರೇಮದ ಭಾವನೆಗಳಿಗೆ ಅಕ್ಷರ ರೂಪ ನೀಡುತ್ತಿದ್ದ ನೀವು ಈಗ ಸಮಾಜ,ಊರು ಕೇರಿ,ಸಮುದಾಯದ ಗಾಢ ಚಿಂತನೆಗೆ ಹತ್ತಿರುವುದು ಗೋಚರಿಸುವುದು. ಉದಯೋನ್ಮುಖ ಸಾಹಿತಿಯಾಗುವ ಮುನ್ಸೂಚನೆ ಕಾಣುವುದು.ಮತ್ತಷ್ಟು,ಮೊಗದಷ್ಟು ಪ್ರಬುದ್ಧವಾದ ಗಟ್ಟಿ ಬರಹಗಳು ನಿಮ್ಮ ಲೇಖನಿಯಿಂದ ಮೂಡುವುದೆಂಬ ಭರವಸೆ ಸಿಕ್ಕಿತು.ಅಭಿನಂದನೆಗಳು.ಓದಿ,ಆಸ್ವಾದಿಸುತ್ತಾ ಹೊಸತನವನ್ನು ನೀವೇ ಸೃಷ್ಟಿಸುವ ಚಿಂತನೆ ಮೈಗೂಡಿಸಿಕೊಳ್ಳಿರಿ.

    ನಿನ್ನನ್ನು ಬಿತ್ತಿದ
    ಜಾಗಕ್ಕೆ ಹಾಲನ್ನೇ
    ಸುರಿದರೂ ಹುಲ್ಲು
    ಕೂಡ ಹುಟ್ಟುವುದಿಲ್ಲ.........................

    ,,,,,,,,ಕಾಲಿಡಲು ಹಿಂಜರಿಯುವ
    ಕೆಸರು ಕೂಡ ಒಂದು
    ಸುಂದರ ತಾವರೆಯ ಜನಕವಾಗುವುದು,,,,,,,,,,,,,,,,,,,,,,,,,,,,,,

    ಬಡವನ ಗುಡಿಸಲೆಂದು
    ಶಶಿಯೂ ಬೆಳದಿಂಗಳ
    ನೀಡಲು ಎಂದೂ ನಿರಾಕರಿಸದು!
    ಇದು ಹಿಂದುಳಿದವನ
    ಕೇರಿಯೆಂದು ತಂಗಾಳಿ ತನಗೆ
    ಬೇಲಿಯ ಹಾಕಿಕೊಳ್ಳದು!
    ಓ ಮಾನವನೇ

    ReplyDelete
  2. Banavasi Somashekhar
    ನನ್ನನ್ನು ನೀವು ಮೊದಲಿಂದ ನೋಡುತ್ತಾ ಇದ್ದೀರಾ ನನ್ನ ಒಂದೊಂದು ಕವನದೊಳಗಿನ ಬದಲಾವಣೆಯನ್ನು
    ಗಮನಿಸಿ ..ಅದನ್ನು ನನಗೆ ಹೇಳಿ ಬೆನ್ನು ತಟ್ಟುವ ನಿಮ್ಮ ಸ್ನೇಹಕ್ಕೆ ಸದಾ ನಾ ಚಿರಋಣಿ
    ಬರೀ ಹನಿಗವಿತೆ ಮಾತ್ರವೇ ನನಗೆ ಬರುವುದೆಂದು ಇದ್ದವನು ನಾನು
    ಇಲ್ಲ ನೀವು ಕೂಡ ದೊಡ್ಡ ಕವನಗಳ ಬರೆಯಬಹುದು ಎನ್ನುವ
    ನಿಮ್ಮ ಮಾತುಗಳು ನನಗೆ ಈಗಲೂ ನೆನಪಿದೆ
    ನಿಮ್ಮ ಆ ಮಾತುಗಳ ಸ್ಪೂರ್ಥಿಯಿಂದಲೇ
    ನಾನು ಕವಿತೆಗಳ ಬರೆಯಲು ಶುರು ಮಾಡಿದ್ದು ...
    ನನ್ನ ಬರವಣಿಗೆಯಲ್ಲಿ ಅಕ್ಷರ ದೋಷ ಎಷ್ಟೋ ಸುಧಾರಿಸಿದೆ
    ಎಂದರೆ ಅದು ನಿಮ್ಮ ಒಡನಾಟದಿಂದ ...
    ನಿಜಕ್ಕೂ ಗಂಧದೊಡನೆ ಇದ್ದರೆ ನಾವು ಕೂಡ
    ಪರಿಮಳಿಸುತ್ತೇವೆ ಎನ್ನುವ ಮಾತಿನ ಹಾಗೆ
    ನಿಮ್ಮೊಂದಿಗಿನ ಸ್ನೇಹವೇ ನನಗೆ ಎಷ್ಟೋ ಕನ್ನಡದ
    ಮೇಲಿನ ಹಿಡಿತಕ್ಕೆ ಕಾರಣ .
    ನಿಮ್ಮ ಸಲಹೆ ಸೂಚನೆಗಳಿಗೆ
    ಮನದಾಳದ ವಂದನೆಗಳು ಗೆಳೆಯ......

    ReplyDelete